ಪ್ರಿಯಾ ಪ್ರಿಯಾ ಎಂದು ಇನಿಯನ

ಪ್ರಿಯಾ ಪ್ರಿಯಾ ಎಂದು ನನ್ನ ಇನಿಯನ
ಹೇಗೆ ನೀನು ಕರೆದೆ ಹೇಳು ಕೋಗಿಲೆ?
ಹರಿಯು ನನ್ನ ಇನಿಯನೆಂದು ತಿಳಿಯದೆ?
ಲಜ್ಜೆ ಬಿಟ್ಟು ನೀನು ಅವನ ಕರೆವುದೆ?

ಕಿಚ್ಚು ಹಚ್ಚಬೇಡ ನನ್ನ ಹೃದಯಕೆ,
ಉಪ್ಪ ಸುರಿಯಬೇಡ ಉರಿವ ಗಾಯಕೆ,
ಒಂದೆ ಸಮನೆ ಯಾಕೆ ಹಾಗೆ ಕೂಗುವೆ?
ಕೂಗಿ ನನ್ನ ಎದೆಯನೇಕೆ ಸೀಳುವೆ?

ಇಂದು ಹರಿಯನೇನಾದರು ಕಂಡರೆ
ನಿನ್ನ ಕೂಗು ನನಗೆ ಶುಭವ ತಂದರೆ
ಮುದ್ದು, ನಿನಗೆ ಸಿಹಿಯ ತಿನಿಸಿ ಸಾಕುವೆ
ಆ ಕೊರಳಿಗೆ ಚಿನ್ನದ ಸರ ಹಾಕುವೆ.

ಹೋಗು ನನ್ನ ಹರಿಗೆ ತಿಳಿಸು ಬಂಧು
ನಿನ್ನ ನಲ್ಲೆ ಕೊರಗುತಿರುವಳೆಂದು;
ಅನ್ನ ನೀರು ತೊರದು ದಾಸಿ ಮೀರಾ
ಗಿರಿಧರನನ ಕಾಯುತಿರುವಳೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ – ೧೨೨
Next post ಅಬ್ಬಾ! ಇಂಥದ್ದೊಂದು ಕಾರು ಬರಲಿದೆಯೆ?!

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys